Showing posts with label ಅಂತರಾಳ. Show all posts
Showing posts with label ಅಂತರಾಳ. Show all posts

Wednesday, February 19, 2014

ಅಲೆ..



ಗೆಳೆಯ,
ನಿನ್ನ ಒಲವಿಗೆ ಕೊಚ್ಚಿಹೋದ
ಹಾಳು ಹುಡುಗಿಗೆ
ದಡದ ಮಡಿಲು ಸಿಗದೆ
ಅಲೆಯಾಗಿ ಉಕ್ಕುತಿಹಳು
ನೆನೆ-ನೆನೆದು ಬಿಕ್ಕುತಿಹಳು
ಯಾಕೋ ಇಂದು
ಹೆಚ್ಚು-ಹೆಚ್ಚು ಕೊರಗುತಿಹಳು
ಮತ್ತೆ-ಮತ್ತೆ ಕರಗುತಿಹಳು
ನಿನ್ನ ಒಲವಿಗೆ ಅದರ ಚಲುವಿಗೆ…

ಪಲ್ಲವಿಯಲು ಹಾಡಿದ
ಚರಣದಲು ಬೇಡಿದ
ಈ ಹಾಳು ಹುಡುಗಿಯ ಹಾಡು ಕೇಳದೆ..?
ಖುಷಿಯ ಮಡಿಲಲಿ
ಉರುಳಬೇಕಿದೆ ನಾಲ್ಕು ಹನಿಗಳು
ನಿನ್ನ ಭುಜದಲಿ..
ಸೇರು ಗೆಳೆಯನೆ..ನನ್ನ ಒಡೆಯನೆ..

---ರಾಮೇನಹಳ್ಳಿ ಜಗನ್ನಾಥ


Wednesday, July 31, 2013

ರೆಪ್ಪೆ ಅಂಚಿನ ಸಂಚು...

ನಿನ್ನ ಕಣ್ಣ ರೆಪ್ಪೆ ಅಂಚು
ಹೊಂಚುಹಾಕಿ
ಮಾಡುತಿಹ ಸಂಚನು
ಕಂಡ ಈ ಅಲೆಮಾರಿ ಮನಸು
ಸುರಿಸುತಿಹುದು ನವಿರಾದ
ಆಸೆಕಿಡಿಯ ಜಡಿಮಳೆಯನು...

ತುಟಿ ಅಂಚಿನ ಸಣ್ಣದೊಂದು
ಕಿರುನಗೆಗೆ ಮೂಡಿದ
ಗುಳಿಗೆನ್ನೆ ಕಂಡ
ಈ ಅಲೆಮಾರಿ,
ಹೂಮನಸ ತುಂಬ
ನಿನ್ನ ಸೂರ ಕಟ್ಟಿ 
ನಿನಗಾಗೆ ಕಾದಿಹನು...

ನನ್ನ ದೇವಿ ನೀನು,
ಹೊಂಗನಸ ತೇರ ಕಟ್ಟಿ
ಕಾದಿಹ ಹುಡುಗನ
ಹೂಮನಸಲೀಗ ಶುರುವಾಗಿದೆ
ಅರಿವಿಲ್ಲದೇ ಮೆರವಣಿಗೆಯು...
ನಿನ್ನ ಕುರಿತೆ ಸಾಲು-ಸಾಲು
ಬರವಣಿಗೆಯು....

-------ರಾಮೇನಹಳ್ಳಿ ಜಗನ್ನಾಥ

Monday, July 15, 2013

ಕದ್ದು-ಕದ್ದು..

ಗೆಳೆಯ,
ಪ್ರತಿದಿನವು ದಾರಿಯಲಿ
ನೀ ಎದುರಾದಾಗ
ಮನಸಿನ ಮಾತನು
ಕೇಳದ ಕಂಗಳು
ನೋಡುವವು ಕದ್ದು-ಕದ್ದು
ಓರೆಗಣ್ಣಲಿ ನಿನ್ನನ್ನೆ..

ಕಣ್ತುಂಬ ನೀನೆ ತುಂಬಿಕೊಂಡಿರೋ
ನನಗೀಗ ದೃಷ್ಠಿದೋಷ ಬಂದಿಹುದು
ಅರಿಯದೇ ಈ ಹೃದಯ
ನಿನ್ನ ಒಲವಲಿ ಜಾರಿಹುದು..

ಕನಸಿನ ಯಾವ ಪುಟವನು
ಖಾಲಿ ಉಳಿಸದೆ
ಆವರಿಸಿರೋ ನಿನ್ನ ಮುಖಪುಟಕೆ
ಕಲ್ಪನೆಯ ಕುಸರಿಯಲಿ
ನೀಡುತ್ತ ನೂರೆಂಟು ರೂಪ
ನಿನಗಾಗೆ ಕಾಯುತ ಕುಳಿತಿರೋ
ಈ ಪಾಪಿ ಹುಡುಗಿಯ ತೋಯ್ದಾಟ
ತಿಳಿಯದೆ ನಿನ್ನ ಹೃದಯಕೆ...

---ರಾಮೇನಹಳ್ಳಿ ಜಗನ್ನಾಥ

Friday, May 17, 2013

ನೆನೆಪೆಂಬ ಸೋನೆ...

ನಿನ್ನ ನೆನಪೆಂಬ ಸೋನೆಗೆ 

ಸದಾ ತೇವಗೊಂಡಿಹ
ಈ ಪ್ರೇಮಿ ಮನಸು
ಕಾಯುತಿಹುದು  ಸದಾ
 ನೀ ಎಂದಾದರೂ
ಬರಬಹುದು ಎಂದು..

ಎದೆಗೂಡ ಜೋಪಡಿಯಲಿ
ಬಚ್ಚಿಟ್ಟ ಕನಸ
ನೆನೆಯೋದೆ ಸೊಗಸು
ಈ ಅಲೆಮಾರಿಗೆ..

ಮಳೆಮೋಡ ನೋವಿನಲಿ ಸುರಿಸಿದ
ನಾಲ್ಕು ಹನಿಯಂತಲ್ಲ.
ಪ್ರತಿಕ್ಷಣವು ಸುರಿಸಿಹುದು
ಕಣ್ಣೀರು..
ಈ ಅಲೆಮಾರಿ ಎದೆಗೂಡು...

ಕೊನೆಗೊಳ್ಳುವ ಮುನ್ನ
ಈ ಅಲೆಮಾರಿ ಬದುಕು
ಕಣ್ಮುಂದೆ ಬಾರೆ
ಕಡೆಗೊಂದು ಬಾರಿ
ಕಣ್ತುಂಬಿಕೊಂಡು ಖುಷಿಯಾಗುವೆ..

-----ರಾಮೇನಹಳ್ಳಿ ಜಗನ್ನಾಥ




Tuesday, April 16, 2013

ಜೊತೆಯಲ್ಲಿ ನಾನು...


ತುಸುವಾದರೂನಗಬಾರದೇ                                                   
ಬಳಿಬಂದರೂ...
ಪಿಸುದನಿಯಲಿ ನುಡಿಬಾರದೇ
ಏನಾದರೂ..
ಬೇಕಂತಲೇ ನೆಪಮಾಡುತ
ಬರಿ ಮಾತಿನ ಮನೆ ಮಾಡುತ..
ನಾ ಬಂದರೂ ಹತ್ತಿರ
ತಿಳಿದು-ತಿಳಿದು ಮಾಡುತೀಯ
ನಟನೆ ಜೋರು..
ಅಪರೂಪಕಾದರೂ ಅರಿವಾಗದಂತೆ ನೀನು
ಕೊಡಬಾರದೇನು ಒಂದು ಸಿಹಿ ಮುತ್ತನು..
ನನ್ನ ಸಹವಾಸದಲ್ಲಾದರೂ
ತುಸು ಹಾಳಗಬಾರದೇನು..?
ಈ ವಯಸಿಗಾದರೂ ವಸಿ ಬೆಲೆಕೊಟ್ಟು
ತುಸು ಪೋಲಿಯಾಗಬಾರದೇನು..?
ಇರುವಾಗ ಪ್ರತಿಕ್ಷಣವು

ಜೊತೆಯಲ್ಲಿ ನಾನು...

Monday, March 4, 2013

ಗುಳಿಗೆನ್ನೆ ಹುಡುಗಿಗೊಂದು ಪತ್ರ...

ಪ್ರಿಯ ಸಖಿ,
ಸೌಖ್ಯವೇ...?
ಇಲ್ಲಿ ಮಳೆಗಾಲ ತರುತಿದೆ
ಮತ್ತೆ-ಮತ್ತೆ ಹೊತ್ತು ನಿನ್ನ ನೆನಪ..
ಮುಂಜಾನೆಯ ರವಿ ಕೂಡ ಕದ ತಟ್ಟಿಹ
ಬಲು ತಡವಾಗಿ..
ಇನ್ನ ಬೀಳೋ ಕನಸುಗಳು ಬರಿ
ನಿನ್ನ ನೆನಪಿನ ಮೂಟೆ ಹೊತ್ತು ತಂದಿವೆ..
ಕನಸೆಂದರೇ ಏನು, ಬರಿ ಭವಿಷ್ಯವಾ..?

ಯಾವುದರ ಹಂಗಿಲ್ಲ
ನಿನ್ನ ನೆನಪಿನ ಗುಂಗಲ್ಲಿ..
ನೀ ನನಗಿಟ್ಟ ಆ ಮೊದಲ
ಪತ್ರ ಹೊಮ್ಮಿಸಿದೆ
ನೆನಪಿನ ನಾದವ ತನ್ನ ನಾಭಿಯಿಂದ...

ಗುಳಿಗೆನ್ನೆ ಹುಡುಗಿ ನೀನು,
ನಿನ್ನ ಆ ನಗು ಕಾಡುತ್ತಿದೆ ಸದಾ..
ವಾಸ್ತವ ಏನ ಬೇಡುತ್ತಿದೆಯೋ
ತಿಳಿಯದು...
ಮತ್ತೆ-ಮತ್ತೆ ಒಲವಾಗುತ
ಪದೇ-ಪದೆ ಮನಸೇಕೋ
ನೆನಪಿಗೆ ಜಾರಿಹಿದು..

ಕಡಲ ದಡದಲ್ಲೂ
ಮುಗಿಲ ಮೊರೆಯಲ್ಲೂ
ಏಕಾಂತದ ಸುಳಿ
ಒಳ ಹೊಕ್ಕಿರುವ ಆ ಗುಳಿ
ಸುಡುತಿಹುದು
ಈ ಚಳಿಗಾಲದಲ್ಲೂ...

ಒಡಲ ಒಳದನಿ
ಸುರಿಸೋ ಕಂಬನಿ
ಒರೆಸಲು ಯಾರಿಲ್ಲದ
ಈ ಅಲೆಮಾರಿ ದನಿ
ಎಂದೂ ಅನಾಥ
ಎಂದಿನಂತೆ...

ಇಂತಿ..
ನಿನ್ನ ಸಖ..


ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Thursday, February 21, 2013

ಮುಂಗುರುಳು...

ಬೀಸುತಿರೋ ಜೋರು ಗಾಳಿ
ಗೆಳತಿ ಗಲ್ಲದ ಮೇಲೆ
ಮಾಡುತಿರೋ ತೊಂದರೆ ನೋಡಿ..
ಅದರ ಮೇಲೆ ನಡೆಸುವ
ಮುಷ್ಠಿ ಪ್ರಹರವ
ಏನೋ ಗುನುಗುತ
ದಾರಿಯಲಿ ಹಾಗೆ ಸಾಗುವ
ಬಾನಿನೆಡೆಗೆ ನೋಡುತ
ಸೃಷ್ಟಿ ಅನುಭವ
ಸೊಗಸು ಎನ್ನುತ...

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್


Tuesday, February 19, 2013

ಸಾಕ್ಷಿ..




ಅರಿವಿಲ್ಲದೇ ಬಿದ್ದ ಈ ಕಣ್ಣ ಹನಿಗಳೇ
ನನ್ನ ನೈಜ ಪ್ರೇಮಕ್ಕೆ ಸಾಕ್ಷಿ ಕಣೆ
ಏನೂ ಬದಲೆನಿಸದೇ
ನನ್ನ ಮತ್ತು ಆತನ ದನಿಯ ನಡುವಲಿ..

ನೈಜ ಪ್ರೀತಿಯೇ ಅರ್ಥವಾಗುವುದಿಲ್ಲವಲ್ಲ
ನಿಮ್ಮಂತ ಮರುಳು ಹುಡುಗಿಯರಿಗೆ
ಪ್ರೇಮವೆಂದರೇ ಹಿಡಿ-ಹಿಡಿ ಬೂಟಾಟಿಕೆಯ
ಮಾತುಗಳ ಆಶ್ವಾಸನೆ ಅಲ್ಲ..

ಹಿಡಿದಿಟ್ಟ ಎದೆಯ ಭಾವಗಳ
ಪ್ರತಿಬಿಂಬ  ಬದಲಿಸಿದಾಗ
ಪ್ರೇಮಿಯ ಹಾವ-ಭಾವ
ಅರ್ಥವಾಗದೇನು..?
ಯಾವುದು ಸತ್ಯಕ್ಕೆ ಸನಿಹ ಎಂದು...

ಏನು ಮಾಡುತ್ತೀರಿ ಹೇಳು
ನೀವು ಹುಡುಗಿಯರೇ ಹೀಗೆ
ಬೇಕಿರುವುದು ಬರಿ ಮಾತು,
ಜೊತೆಗಾಗಿ ಸುತ್ತಾಟ..
ಇವಿಷ್ಟೇ ಪ್ರೇಮ ಎಂದುಕೊಂಡಿರುವಿರಿ..

ನಿಜವಾದ ಪ್ರೇಮ ಎಂದೂ ಮೂಕವೇ
ಹಸಿರಸಿರ ಎಲೆಗಳ ನಡುವಿನ ಮೊಗ್ಗಂತೆ
ಹಾಗೂ ಈ ಉಸಿರ ಏರಿಳಿತಗಳ ನಡುವೆ
ಜಪಿಸುವ ನಿಮ್ಮ ಹೆಸರಂತೆ..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Monday, February 4, 2013

ಆಸೆಯೇ ದುಃಖಕೆ ಮೂಲ...




ದಾರಿಯ ಮಧ್ಯೆ
ಕವಲಾದವಳು ನೀನು
ಬದುಕಿನ ಮಧ್ಯೆ
ಒಲವ ಹೆಸರಲ್ಲಿ
ಬಂಧಿ ಆದವನು ನಾನು
ಉಳಿಸಿಕೊಳ್ಳಲಾರದೇ
ಹೊದೆಯಲ್ಲ ನಮ್ಮಿಬ್ಬರ ನಡುವಿನ ಮಾತನು..

ಸಮಯಕ್ಕೆ ಅರ್ಥ
ವ್ಯಯಿಸಿದ್ದಕ್ಕೆ ಸಿಕ್ಕರೆ ಉತ್ತರ
ಇಲ್ಲವಾದರೇ ಅದೂ ಕೇಳದೇ
ಇರುವುದೇ ವ್ಯಯಿಸಿದ್ದಕ್ಕೆ ಪ್ರಶ್ನೆ.(.?.)

ಸುಮ್ಮನೇಕೋ ಮೂಕ ಸಾಕ್ಷಿಗಳಾದವು
ನಮ್ಮ ಪ್ರೇಮದ ನಡುವಲಿ
ಬಲಿಪಶುವಾದ ವಸ್ತುಗಳು
ನಮ್ಮ ಪ್ರೇಮವೇ ಮೂಕರಾಗವಾಗಿರುವಾಗ
ಸಾಕ್ಷಿಗಳು ಮೂಕವಾಗಿರುವುದರಲ್ಲೇನು
ಬಂತು ಹೇಳು..

ಆಸೆಗಳ ಕಣಜ ತಾನೆ.!
ನನ್ನಂತೆ ಈ ಮನುಜ
ನಿನ್ನ ಪಡೆದೇ ಪಡೆಯುವನೆಂದು
ಇದ್ದ ಆಸೆಯೋ ದುರಾಸೆಯೋ
ಆಯಿತಲ್ಲ ಕೊನೆಗೂ ನಿರಾಸೆ

ಮನ ಸುಮ್ಮನಾಯಿತು
ಯಾಕೆ ಗೊತ್ತೇ..?
ಆಸೆಯೇ ದುಃಖಕೆ ಮೂಲ
ಎಂಬ ಬುದ್ಧನ ಮಾತು ನೆನೆದು..

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Thursday, January 31, 2013

ಪ್ರೇಮ...



ಮರೆಮಾಚಿ ನೋಡುವುದರಿಂದ
ಆರಂಭಗೊಂಡ ಪ್ರೇಮ
ಭಾವ ಬಂಧನದಿಂದ
ಸಿಗುವುದೇ ಈ ಪ್ರೇಮ..
ಬರೆಯೋ ಪ್ರೇಮ ಪತ್ರಗಳ
ಕೊಡಲಾಗದೇ ಹರಿಯುವುದರಿಂದ
ತಿಳಿಯುವುದೇ ಈ ಪ್ರೇಮ..
ಕಣ್ಣ ಹನಿಗಳಿಂದ
ಫಲಿಸುವುದೇ ಈ ಪ್ರೇಮ..
ಮೂಕರಾಗವಾಗಿ ಉಳಿದುಹೋದ
ಎದೆಯ ಹಾವ-ಭಾವ
ತಿಳಿಯೋಲ್ಲ ತಿಳಿದುಕೊಳ್ಳೋಲ್ಲ
ಯಾವುದೇ ಹೆಣ್ಣು ಜೀವ...

ಆತ್ಮೀಯವಾಗಿ,
ಜಗನ್ನಾಥ.ಆರ್.ಎನ್

Thursday, January 17, 2013

ಶೂನ್ಯ...



ಬರೆಯುವಾಗಿನ ಲೇಖನಿಯ
ನೆರಳು ಕೂಡ ಅಣಕಿಸುತಿದೆ
ನೀ ಬರೆಯುವುದು
ಅವಳ ಕುರಿತೆ ಎಂದೆ...
ಆ ನೆರಳಿಗೇನು ಗೊತ್ತು ಪಾಪ
ನೀ ನನ್ನ ಸ್ವಾತಿಮುತ್ತು ಎಂದು..

ಎಲ್ಲ ಬೆರಗು ಕಂಗಳಿಂದ
ನೋಡಬಹುದು ನನ್ನ..
ಯಾರೂ ನನ್ನ ಆಂತರ್ಯದಿಂದ
ದೂರ ಮಾಡಲಾರರು ನಿನ್ನ...
ನೀನೂ ಕೂಡ ಅಳಿಸಲಾರೆ
ನನ್ನ ಎದೆಗೂಡಿನಲ್ಲಿನ ನಿನ್ನ ಮುಖಪುಟವ..
ಆವರಿಸಿರುವಾಗ ನಿನ್ನದೆ
ಪ್ರತಿ ಪುಟವ...

ನೀನೇ ನನ್ನ ಒಲವ ಮುಂದೆ
ಸೋತಿರುವಾಗ..
ಗೆಲ್ಲುವರ್ಯಾರು ಇನ್ನ ನನ್ನ ಮುಂದೆ..
ಕನಸು ಕೂಡ ಸೋತಿರುವಾಗ
ಬೇರೆ ಕನಸಿಗೆ ಜಾಗ ನೀಡಲು..
ಮನಸೇ ಮುಡಿಪಾಗಿರುವಾಗ
ನಾನೆಂದು ನಿನಗೆ ಎನಲು
ಜಗವೆಲ್ಲ ಶೂನ್ಯ ..

ಆತ್ಮೀಯವಾಗಿ,
ಜಗನ್ನಾಥ ಆರ್.ಎನ್

Friday, December 28, 2012

ಮುಂಗುರುಳು..


ಯಾರಿರದ ದಾರಿಯಲಿ
ಗೆಳತಿ ಜೊತೆಯಲ್ಲಿ ನೀನು ಇರಲು..
ಮನವೀಗ ಮಳೆಬಿಲ್ಲ ಮುಗಿಲು..
ಮಾತಿರದ ಮೌನದಲಿ
ಭಾವಗಳ ಅದಲು-ಬದಲು
ಗೆಳತಿ ನೀ ಜೊತೆಗಿರಲು..
ಆ ತಂಗಾಳಿಯೊಡನೆ ಸಂಘರ್ಷ ನೆಡೆಸುತಿರಲು
ಆ ನಿನ್ನ ಮುಂಗುರುಳು..
ಅದ ಪದೇ-ಪದೇ ಸರಿಮಾಡಿಕೊಳ್ಳುತಿರೋ
ಆ ನಿನ್ನ ಕೈ-ಬೆರಳು..
ಅಹಾ..! ಅದ ನೋಡಲೆಷ್ಟು ಅದ್ಭುತ
ಆ ಬಿಂಬ ಹಿಡಿದಿಟ್ಟ ನನ್ನ ಕಂಗಳಿಗೆ
ಒದಗಿರಬಹುದು ಅದೆಷ್ಟು ಹಿತ..
ಬೇಕೆಂತಲೇ ನಾ ಕೈ ತಾಗಿಸಿದಾಗ
ನಸುನಕ್ಕು ನೀ ನನ್ನಡೆ ನೋಡಿದಾಗ
ವಶವಾಗದೇ ಇರಲಾರೆನೇ ನಾನು
ಹೇಳಿಬಿಡಲೇ ಇಲ್ಲಿಯೇ ಎಲ್ಲವನು...
















ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್
 

Monday, December 17, 2012

ಪ್ರಶ್ನಾರ್ಥಕ..?

ಪ್ರಶ್ನಾರ್ಥಕ..?

ಏನೊಂದು ಹೇಳದೆ
ನೀ ಹಾಗೇನೇ ಸಾಗಿದೆ..
ಏನೊಂದು ಕೇಳದೆ
ನಾ ಹಾಗೇನೇ ಹೇಳಿದೆ..
ಕೇಳಿದರೆ ಕಾರಣ
ಬದಲಿಸುತಿರುವೆ ಮಾತು..
ಬಯಲಾಗುತಿರುವೆ ನಾ
ನಿನಗೆ ಸೋತು-ಸೋತು..
ನಮ್ಮಿಬ್ಬರ ನಡುವಲಿ  ಎಲ್ಲ ಹೇಳಿಕೊಂಡ
ನಾನೊಂದು ಈಗ ತೆರದ ಪುಸ್ತಕ..
ಏನನು ಹೇಳಲಾರದೇ ಸಾಗುತಿರುವ
ನೀನೊಂದು ಪ್ರಶ್ನಾರ್ಥಕ..?

ಇಲ್ಲಿಯವರೆಗೂ ಯಾವ ರಾಧೆಯ
ಕೂಗಿಗೂ ಹೂಗುಟ್ಟದ ಮೂಖ ನಾನು..
ಆದರೆ,
ನೀ ಕರೆಯದೇ ಇದ್ದರೂ ನನಗೆ ನಾನೆ
ಹೂಗುಟ್ಟುಕೊಳ್ಳುತ್ತಿರುವ ಮೂರ್ಖ ನಾನು..
ಇದ ಅರಿಯದ ಹುಡುಗಿ ನೀನೋ..?
ಇಲ್ಲ ಅರಿತು ಎಲ್ಲ ಮರೆತು
ಸಾಗುತಿರುವ ಜಾಣ ಹುಡುಗಿ ನೀನೋ..?
ತಿಳಿಯದು ಮನಕೆ...

ಆತ್ಮೀಯವಾಗಿ,
ಜಗನ್ನಾಥ. ಆರ್.ಎನ್