Thursday, May 9, 2013

ರೇಖಾಚಿತ್ರ..


ಹೇ ಹುಡುಗ,                                                 
ಯಾವ ಸುಳಿವನು ನೀಡದೆ
ಕನಸಲಿ ಬಂದ ನಿನಗೆ
ಇರಬಾರದೇ ಚೂರಾದರು ಅಳುಕು..?
ಅನುಮತಿ ಕೇಳದೆ
ಮುತ್ತನು ನೀಡಿದೆ..
ಇತಿ-ಮಿತಿ ಇಲ್ಲದೆ
ಅತಿಕ್ರಮ ಮಾಡಿದೆ..
ಆ ನಿನ್ನ ರಭಸ ನೋಡಿ
ಆಗೋದೆ ಬೆಪ್ಪುತಕಡಿ..
ಈ ತುಟಿಯ ಗಾಯ ನೋಡಿ
ಚೂರಾಯ್ತು ಹೊಸ ಕನ್ನಡಿ..
ಇಡಿ ರಾತ್ರಿ ನೀ ಬಿಡಿಸಿದೆ
ರೇಖಾಚಿತ್ರವ
ಮುನ್ನುಡಿಯಲು-ಬೆನ್ನುಡಿಯಲು..
ಒಂದೊಂದು ಜಾಗದಿ
ಹೊಸಬಗೆಯ ಬೇಗುದಿ
ಆ ನಿನ್ನ ಸ್ಪರ್ಶದಿ ..
ಅಹಾ..! ಒಮ್ಮೊಮ್ಮೆ
ಅದು ಪುಳಕ
ಮೈಯ್ಯಲ್ಲಾ ನಡುಕ
ಒಟ್ಟಾರೆ ಸಿಹಿ ನರಕ...

-----ರಾಮೇನಹಳ್ಳಿ ಜಗನ್ನಾಥ