Saturday, August 9, 2014

ಮಡಿಲು...

ಕವಿತೆ ಹುಟ್ಟುವ
ಪ್ರತಿ ಸಮಯದಲೂ
ನಿನ್ನ ನೆನಪಿನ ಆಣಿಕಲ್ಲ(ಆಲಿಕಲ್ಲು) ಮಳೆ ಜೋರಿದೆ..
ನೆನಪ ಮೆಟ್ಟಿ ಹೊರ ಬರುವ
ಪ್ರತಿ ಯತ್ನದಲ್ಲೂ ಸೋಲಿದೆ..
ಸೋಲೋ -ಗೆಲುವೋ ತರ್ಕಗಳಿಗೆ
ಇಳಿಯದ ಮನಸಿನ ಜೊತೆಯಾಗಿ
ಶರಾಬಿದೆ...
ಕಟ್ಟಿಗೆಯೇ ಇರದೆ
ಅಲೆಮಾರಿ ಎದೆ ಉರಿಯುತಿದೆ..
ಮತ್ತೆ-ಮತ್ತೆ ಸಾಲು-ಸಾಲು
ಕವಿತೆ ಕಟ್ಟುತಿದೆ..
ಅಲಮಾರಿನ ತುಂಬ ನೀ ಕೊಟ್ಟ
ಉಡುಗೊರೆಯ ಗೊಂಚಲಿದೆ..
ಅದ ನೋಡುತ ಇಡಿ ರಾತ್ರಿ
ಗೀಳಿಟ್ಟ ಅದೆಷ್ಟೋ ದಿನಗಳಿವೆ..
ಇಂತ ಕ್ಷಣಗಳಲಿ ಜೊತೆಯಾಗಿ
ನನ್ನೊಡನೆ ತಾಯಿ ಮಡಿಲಿದೆ...

-----ರಾಮೇನಹಳ್ಳಿ ಜಗನ್ನಾಥ


Monday, April 7, 2014

(ಅ)ರಾಜಕೀಯ...


ಕೈ-ಕಮಲ ತೃಣಮೂಲ
ಹುಡುಕ್ ಬೇಡಿ ಉಳಿದೋರ್ ಮೂಲ
ನೂರಾರು ಪಾರ್ಟಿಗಳು ದೇಶದಗಲ
ಮೇವು ಮೇದೋರ ಬಾಯಲ್ಲು ವೇದಾಂತ
ಹೊರೆ ಹೊತ್ತೋರ ಬಾಯಲ್ಲು ಸಿದ್ಧಾಂತ
ಇನ್ನ ಸಿಟಿ ತುಂಬ ಸ್ಟ್ಯಾಚುಗಳದ್ದೇ ರಾದ್ಧಾಂತ....
ಯೂತ್ ಲೀಡರ್ ಎಂಪವರ್ ಮೆಂಟು
ಅಪ್ಪ-ಮಕ್ಕಳ ಸೆಂಟಿಮೆಂಟು
ಸಂಘದೋರ ಸ್ಟೇಟ್ ಮೆಂಟು
ಉಳಿದೋರ ಸೆಟಲ್ ಮೆಂಟು
ಅಮ್ಮ ಕೂಡ ಪಿ.ಎಮ್ ಕ್ಯಾಂಡಿಡೇಟು..!
ಬ್ಯುಸಿ-ಬ್ಯುಸಿ ಮೋದಿ ಡೇಟು
ಒಟ್ಟಾರೆ ಬರ್ಲಿ ಒಳ್ಳೇ ಗವರ್ನಮೆಂಟು...
2ಜಿ ರಾಜ ರಾಬಟ್ ವಾದ್ರಾ
ಡಿ.ಕೆ ಬ್ರದರ್ಸ್ ರೆಡ್ಡಿ ಬ್ರದರ್ಸ್ ಎಟ್ಸಟ್ರಾ..ಎಟ್ಸಟ್ರಾ..
ನೋಡಿ ನೋಡಿ ಸಾಕಾಗೋಗಿ
ಪೊರಕೆ ಹಿಡಿದ ಕೇಜ್ರಿನೂ ಗೆಲ್ಲಿಸಿದ್ದಾಯ್ತು ಡೆಲ್ಲಿಯಲ್ಲಿ
ಅದ್ರೆ..! ಕ್ರೇಜು ನೋಡಿ ಗೆಲ್ಲುಸ್ ಬಿಟ್ರಲ್ಲ ನಮ್ಮ ಮಂಡ್ಯದಲ್ಲಿ..
ವಸಿ ನೋಡ್ಕಂಡು ವತ್ರಣ್ಣ ಒಳ್ಳೇರ್ಗೇ ಇರೋರಲ್ಲಿ..

---ರಾಮೇನಹಳ್ಳಿ ಜಗನ್ನಾಥ

Friday, March 7, 2014

ಈಕೆ..

ಚಂದದ ರೇಶಿಮೆ ಸೀರೆ
ತೊಳೆಯಲು ಗಿರಾಕಿಗಳು
ಕೊಟ್ಟಾಗ,
ಉಟ್ಟಂತೆ-ತೊಟ್ಟಂತೆ
ಕನಸ ಕಂಡು
ಮತ್ತೆ,
ಗಿರಾಕಿಗಳ ಕೈಗಿಡುವಳು
ಈಕೆ,
ಆಸೆಗಣ್ಣಿನಿಂದ
ಪಕ್ಕದಲ್ಲಿದ್ದ
ತನ್ನ
ಗಂಡನ ನೋಡುತ..

---ರಾಮೇನಹಳ್ಳಿ ಜಗನ್ನಾಥ

Friday, February 28, 2014

ಹಾಳು ಹಾರ್ಟು..

ಹಾಳು ಹಾರ್ಟಲಿ ಲವ್ವಾಗೈತೆ
ಎಣ್ಣೆ ಇಲ್ದೆ ಟೈಟಾಗೈತೆ
ಅವಳ ಲುಕ್ ಲ್ಲಿ ಎನೋ ಫೀಲು ಐತೆ
ಸುಕ್ಕಾ ಕುಡಿದ ಕಕ್ಕು ಐತೆ
ಡೌಟೇ ಇಲ್ದೇ ಬೋಲ್ಡಾಗೈತೆ
ಖಾಲಿ ಹಾರ್ಟು ತುಂಬೋಗೈತೆ
ಗೊತ್ತೇ ಇಲ್ದೇ ಗುಂಡಿಗೆ ಬಿದ್ನ
ಗೊತ್ತೇ ಆಗ್ತಿಲ್ಲ...

---ರಾಮೇನಹಳ್ಳಿ ಜಗನ್ನಾಥ

Thursday, February 27, 2014

ಶಿವ-ಶಿವ


















ಸುಮಾರು ಒಂದು ವರ್ಷದ ಹಿಂದೆ ಸುಮ್ಮನೆ  “ಶಿವರಾಜ್ ಕುಮಾರ್ “ ಮನಸಿನಲ್ಲಿಟ್ಟುಕೊಂಡು ಬರೆದ ಸಿನಿ ಗೀತೆ… 



ಸೆಂಟಿಮೆಂಟು ಸೈಡ್ ಗೆ ಇಟ್ಟು
ಜೋಗಿ  ಸ್ಟೈಲ್ ಲಿ ಕೂದ್ಲ ಬಿಟ್ಟು
ಓಂ ನ ಸ್ಟೈಲ್ ಲಿ ಎಂಟ್ರಿ ಕೊಟ್ಟು
ಕೈಲಿ ಹಿಡಿದ್ರೆ ಲಾಂಗು ಮಚ್ಚು
ಇಲ್ವೇ ಇಲ್ಲ ದೂಸ್ರ ಮಾತು
ಶಿವ-ಶಿವ……                     (ಪಲ್ಲವಿ)

ಏಜು-ಗೀಜು ಮ್ಯಾಟ್ರೇ ಅಲ್ಲ
ಎಂತ ಸ್ಟೆಪ್ಪು ಎಂತ ಲುಕ್ಕು
ಸ್ಟೆಪ್ಪಿಗೊಂದು ಹೊಸ ಕಿಕ್ಕು
ಅಣ್ಣ ಕುಣಿದರೆ ಶಿವಣ್ಣ ಕುಣಿದರೆ
ಕೈಲಿ ಹಿಡಿದ್ರೆ ಲಾಂಗು ಮಚ್ಚು
ಲಾಂಗಿಗೆಂತು ಹೊಸಾ ಗ್ರಿಪ್ಪು
ಅಣ್ಣ ಹಿಡಿದರೆ ಶಿವಣ್ಣ ಹಿಡಿದರೆ
ಶಿವ-ಶಿವ…                        (ಚರಣ 1)

ಎಂಟ್ರಿಯಿಂದ ಇಲ್ಲಿತನಕ
ಪಡ್ಡೆಯಿಂದ ಗೆಡ್ಡೆವರೆಗೂ
ಮೆಚ್ಚಿದಂತ  ನಟನಿವ..
ಎಷ್ಟೆ ಆದ್ರು ಯಾರಿವ..?
ಅಣ್ಣೋರ ಮಗನಿವ..
ಕರುನಾಡಿಗೊಬ್ಬನೇ ಈ ಶಿವ…
ಶಿವ-ಶಿವ..ಪರಮಶಿವ ..            (ಚರಣ 2)

--ರಾಮೇನಹಳ್ಳಿ ಜಗನ್ನಾಥ

Wednesday, February 26, 2014

ಗೆಳತಿ,
ಏನಿದೆ ಈ ಮುಗಿಲಲಿ..
ಏನಿದೆ ಈ ಕಡಲಲಿ..
ಎಲ್ಲಕೂ ಮಿಗಿಲಿದೆ
ನಿನ್ನಾ ಮಡಿಲಲಿ..

..ರಾಮೇನಹಳ್ಳಿ ಜಗನ್ನಾಥ

Tuesday, February 25, 2014

ತೇರು..

ಬುಡ ಸಹಿತ ಕೀಳಲಾಗದ
ನಿನ್ನ ಭಾವಗಳ ಬೇರು..
ನೆನಪ ರಹಿತ ಇರಲಾರದ
ನನ್ನ ರಾತ್ರಿಗಳ
ಹೊತ್ತೊಯ್ಯೋ ತೇರು...

----ರಾಮೇನಹಳ್ಳಿ ಜಗನ್ನಾಥ

ಮಿನುಗು..

ಗೆಳತಿ,
ನಡುರಾತ್ರಿಯಲಿ
ಆಕಾಶ
ಮಿನುಗುತಿರುವಾಗ...
ನನ್ನ ಕಂಗಳು ಮಾತ್ರ
ಜಿನುಗುತಿದ್ದೊ
ನಿನ್ನ ನೆನೆದು..

Wednesday, February 19, 2014

ಅಲೆ..



ಗೆಳೆಯ,
ನಿನ್ನ ಒಲವಿಗೆ ಕೊಚ್ಚಿಹೋದ
ಹಾಳು ಹುಡುಗಿಗೆ
ದಡದ ಮಡಿಲು ಸಿಗದೆ
ಅಲೆಯಾಗಿ ಉಕ್ಕುತಿಹಳು
ನೆನೆ-ನೆನೆದು ಬಿಕ್ಕುತಿಹಳು
ಯಾಕೋ ಇಂದು
ಹೆಚ್ಚು-ಹೆಚ್ಚು ಕೊರಗುತಿಹಳು
ಮತ್ತೆ-ಮತ್ತೆ ಕರಗುತಿಹಳು
ನಿನ್ನ ಒಲವಿಗೆ ಅದರ ಚಲುವಿಗೆ…

ಪಲ್ಲವಿಯಲು ಹಾಡಿದ
ಚರಣದಲು ಬೇಡಿದ
ಈ ಹಾಳು ಹುಡುಗಿಯ ಹಾಡು ಕೇಳದೆ..?
ಖುಷಿಯ ಮಡಿಲಲಿ
ಉರುಳಬೇಕಿದೆ ನಾಲ್ಕು ಹನಿಗಳು
ನಿನ್ನ ಭುಜದಲಿ..
ಸೇರು ಗೆಳೆಯನೆ..ನನ್ನ ಒಡೆಯನೆ..

---ರಾಮೇನಹಳ್ಳಿ ಜಗನ್ನಾಥ


Wednesday, February 12, 2014

ತಬ್ಬಲಿ..



ಗೆಳತಿ,
ಹಾಳು ಹೃದಯದ
ಭಾವಗಳ ಮಾಡುತ
ತಬ್ಬಲಿ..
ಉಳಿದು ಹೋಗಬೇಡ ಹಾಗೆ
ಕಣ್ಣಂಚಿನ ಹನಿಯಾಗಿ..
       …..ರಾಮೇನಹಳ್ಳಿ ಜಗನ್ನಾಥ