ಗೆಳೆಯ,
ನಿನ್ನ
ಒಲವಿಗೆ ಕೊಚ್ಚಿಹೋದ
ದಡದ ಮಡಿಲು
ಸಿಗದೆ
ಅಲೆಯಾಗಿ
ಉಕ್ಕುತಿಹಳು
ನೆನೆ-ನೆನೆದು
ಬಿಕ್ಕುತಿಹಳು
ಯಾಕೋ
ಇಂದು
ಹೆಚ್ಚು-ಹೆಚ್ಚು
ಕೊರಗುತಿಹಳು
ಮತ್ತೆ-ಮತ್ತೆ
ಕರಗುತಿಹಳು
ನಿನ್ನ
ಒಲವಿಗೆ ಅದರ ಚಲುವಿಗೆ…
ಪಲ್ಲವಿಯಲು
ಹಾಡಿದ
ಚರಣದಲು
ಬೇಡಿದ
ಈ ಹಾಳು
ಹುಡುಗಿಯ ಹಾಡು ಕೇಳದೆ..?
ಖುಷಿಯ
ಮಡಿಲಲಿ
ಉರುಳಬೇಕಿದೆ
ನಾಲ್ಕು ಹನಿಗಳು
ನಿನ್ನ
ಭುಜದಲಿ..
ಸೇರು
ಗೆಳೆಯನೆ..ನನ್ನ ಒಡೆಯನೆ..
---ರಾಮೇನಹಳ್ಳಿ
ಜಗನ್ನಾಥ