Wednesday, July 31, 2013

ರೆಪ್ಪೆ ಅಂಚಿನ ಸಂಚು...

ನಿನ್ನ ಕಣ್ಣ ರೆಪ್ಪೆ ಅಂಚು
ಹೊಂಚುಹಾಕಿ
ಮಾಡುತಿಹ ಸಂಚನು
ಕಂಡ ಈ ಅಲೆಮಾರಿ ಮನಸು
ಸುರಿಸುತಿಹುದು ನವಿರಾದ
ಆಸೆಕಿಡಿಯ ಜಡಿಮಳೆಯನು...

ತುಟಿ ಅಂಚಿನ ಸಣ್ಣದೊಂದು
ಕಿರುನಗೆಗೆ ಮೂಡಿದ
ಗುಳಿಗೆನ್ನೆ ಕಂಡ
ಈ ಅಲೆಮಾರಿ,
ಹೂಮನಸ ತುಂಬ
ನಿನ್ನ ಸೂರ ಕಟ್ಟಿ 
ನಿನಗಾಗೆ ಕಾದಿಹನು...

ನನ್ನ ದೇವಿ ನೀನು,
ಹೊಂಗನಸ ತೇರ ಕಟ್ಟಿ
ಕಾದಿಹ ಹುಡುಗನ
ಹೂಮನಸಲೀಗ ಶುರುವಾಗಿದೆ
ಅರಿವಿಲ್ಲದೇ ಮೆರವಣಿಗೆಯು...
ನಿನ್ನ ಕುರಿತೆ ಸಾಲು-ಸಾಲು
ಬರವಣಿಗೆಯು....

-------ರಾಮೇನಹಳ್ಳಿ ಜಗನ್ನಾಥ

5 comments:

Badarinath Palavalli said...

ತುಂಬಾ ಅರ್ಪಣಾ ಭಾವ ಗೆಳೆಯ. ಆಕೆ ಪುಣ್ಯ ಮಾಡಿದ್ದರು.
http://badari-poems.blogspot.in

Unknown said...

ನಿಮ್ಮ ಅಭಿಪ್ರಾಯಕ್ಕೆ ಧನ್ಯವಾದಗಳು ಬದ್ರೀನಾಥ್ ಸರ್...

prashasti said...

ಮುಂದುವರೆಯಲಿ ನೆನಪಿನ, ಭಾವಗಳ ಮೆರವಣಿಗೆ :-)

ವೀಣಾ(ಮೌನ ವೀಣೆ) said...

ಚೆಂದದ ಬರಹ . ಸಾಗುತಿರಲಿ ಬರವಣಿಗೆಯ ಮೆರವಣಿಗೆ...

Unknown said...

ಪ್ರಶಸ್ತಿ ಮತ್ತು ವೀಣಾರವರಿಗೆ ಧನ್ಯವಾದಗಳು..