Tuesday, February 11, 2014

ಒಂದಿಷ್ಟು ಗೊಂದಲದ ಪ್ರಶ್ನೆಗಳು



ಬದುಕಬೇಕಿದೆ ಕೇವಲ
ಈ ಭೂಮಿಯ ಮೇಲೆ  ಹುಟ್ಟಿದ್ದಕ್ಕಾಗಿ
ಕಾರಣ,
ಈ ಬದುಕಿನಲ್ಲಿನ ಶ್ರೇಷ್ಠತೆಗಳು, ನಂಬಿಕೆಗಳು ಇತ್ಯಾದಿ..ಇತ್ಯಾದಿ..
ಯಾವುದನೂ ಸರಿಯಾಗಿ ಗುರುತಿಸಲಾರದ
ವಾತಾವರಣವೇ ಇಲ್ಲದಿರುವಾಗ
ಬದುಕಿನ ಸಾರ್ಥಕತೆಯ ಬಗ್ಗೆ
ಗೊಂದಲಗಳು ತಳವೂರಿವೆ...

ಸರಿ-ತಪ್ಪುಗಳ್ಯಾವುದೆಂದು
ಸರಿಯಾಗಿ ಅರ್ಥವೇ ಆಗದೆ,
ಅವರವರ ದೃಷ್ಠಿಕೋನಗಳಿಗಿಲ್ಲಿ
ತಪ್ಪುಗಳು ಸರಿಯಾಗಿ ಬದಲಾಗಿವೆ
ತಪ್ಪು ಈಗ ತಪ್ಪಾಗೆ ಉಳಿದಿಲ್ಲ
ಒಟ್ಟಾರೆ ಸಾಗುತಿದೆ ಗೊಂದಲದಲೇ ಬದುಕು..

ಸತ್ಯವೆಂತು ಹಾಸ್ಯಾಸ್ಫದವಾಗಿ
ಹರಿಶ್ಚಂದ್ರನ ಉದಾಹರಣೆ
ಹೊಗಳಿಕೆಗೋ-ತೆಗಳಿಕೆಗೋ
ತಿಳಿಯದಾಗಿದೆ...
ವಿಜ್ಞಾನಿಗಳ ಶ್ರಮ ಫಲಪ್ರದವಾದರೆ
ಸ್ವಚ್ಚಂದ ಬದುಕ ಕಟ್ಟಿಕೊಳ್ಳಬಹದಾ..?
ಮಂಗಳ ಗ್ರಹದಲ್ಲಿ..?

            

--ರಾಮೇನಹಳ್ಳಿ ಜಗನ್ನಾಥ

No comments: